ಒರೆಸಿಬಿಡು ಬೇಕಾದರೆ ಗೋಳಿಡುವ ಈ ದುರ್ಬಲ ಬದುಕನ್ನು,
ಬೋರ್ಡಿನ ಮೇಲೆ ಬರೆದ ಅಲ್ಪಾಯುಷಿ ಅಕ್ಷರಗಳನ್ನು
ಡಸ್ಟರು ಸುಮ್ಮನೆ ಒರೆಸಿಬಿಡುವಂತೆ.
ನಿನ್ನವರ್ತುಲಕ್ಕೆ ಮತ್ತೆ ಹೆಜ್ಜೆ ಇಡಲು ಕಾದಿದ್ದೇನೆ
ನಾನು ಹೆಜ್ಜೆ ಇಟ್ಟು ನಡೆದು ಬಳಲಿದ
ಹಾದಿಗಳೆಲ್ಲ ನಿನ್ನಲ್ಲಿ ತಲುಪಿ ನೆಲೆಗೊಳ್ಳಲಿ ಬಿಡು.
ನಡೆ ನಡೆಯುತ್ತ ನನ್ನ ನಿಜ ದಂದುಗ
ಮರೆವೆಗೆ ಸಂದಿತ್ತು-ನಾನಿಲ್ಲಿಗೆ ಮತ್ತೆ ಬಂದಿರುವುದೇ ಸಾಕ್ಷಿ.
ನನ್ನ ಮಾತು ವಚನವಾಗದೆ ಬರಿಯ ರಚನೆಯಾಗಿತ್ತು.
ದಡಕ್ಕೊಮ್ಮೆ ಬಡಿದು ಉಲಿಯುವ ನಿನ್ನ ಅಲೆದನಿ
ಕೇಳಿದಾಗ ಒಮ್ಮೊಮ್ಮೆ, ಮರೆತ ತನ್ನೂರನ್ನು ನೆನೆವ
ಅಳಿಮನದವನಂತೆ ನನ್ನೆದೆ ತಳಮಳಗೊಳ್ಳುತ್ತಿತ್ತು.
ನೀಲವಿಸ್ತಾರಕ್ಕೆ ಎದೆತೆರೆದೊಡ್ಡಿ ಹರಡಿರುವ ನಿನ್ನ ಬಯಲ ಸೌಂದಯರ್ಯಕ್ಕಿಂತ
ನಟ್ಟ ನಡುಹಗಲ ಬಿಸಿಲುರಿಯಲ್ಲಿ, ನಿರ್ಜನ ದಡದಲ್ಲಿ,
ಕೇಳುವ ನಿನ್ನ ಅಲೆಗಳ ಸದ್ದಿರದ ಏದುಬ್ಬಸದ ದನಿ
ಪಾಠ ಕಲಿಸಿದೆ ನನಗೆ ಶರಣು ಶರಣು ನಿನಗೆ.
ಬೆಳಕಿನ ಕಿರಣದೊಂದು ಅಣುವು ಮಾತ್ರ ನಾನು.
ಉರಿವುದೊಂದು ಬಿಟ್ಟು ಇನ್ಯಾವ ಅರ್ಥವೂ ಇಲ್ಲ ನನಗೆ.
*****
ಮೂಲ: ಯೂಜೀನ್ ಮಾಂಟೇಲ್ / Eugenio Montale
Related Post
ಸಣ್ಣ ಕತೆ
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ಕಳ್ಳನ ಹೃದಯಸ್ಪಂದನ
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…
-
ಕೇರೀಜಂ…
ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
-
ಸಿಹಿಸುದ್ದಿ
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…